Tuesday, December 1, 2009

ವಾತ್ಸಲ್ಯಮಯಿ ಅಮ್ಮಂದಿರ ಬಗ್ಗೆ....


ಎರಡು ಅಕ್ಷರದಲ್ಲಿ ಅದೆಂತ ಅದ್ಭುತ ಇದ್ದೋ ಏನೋ... ಆ ಪದ ಕೇಳಿದ, ಓದಿದ ಕೂಡಲೇ ಮೈ ಜುಂ ಹೇಳ್ತು.
’ಅಮ್ಮ’ -ನಿನಗೆ ನೀನೇ ಸಾಟಿ... ನಿನ್ನ ಕರುಣೆ, ಪ್ರೀತಿ, ವಾತ್ಸಲ್ಯ ಮರೆಯಲಾಗದ್ದು, ಜೀವನ ಪರ್ಯಂತ ಪ್ರತಿ ದಿನ ಪ್ರತಿ ಕ್ಷಣ ಎಲ್ಲರೂ ನಿನ್ನನೆನೆಯಕ್ಕು..

ಆ ಬ್ರಹ್ಮನ ಸೃಷ್ಟಿಲಿ ಅತ್ಯಮೂಲ್ಯ, ಬೆಲೆಕಟ್ಟಲಾಗದ್ದ ಸೃಷ್ಟಿ ಯಾವುದಾದರು ಇದ್ದರೆ ಅದು ಅಮ್ಮ ಮಾತ್ರ.
ಟಿವಿಲಿ ಅಥವಾ ರೇಡಿಯಲ್ಲಿಯಾ ಅಮ್ಮಂದ್ರ ಕುರಿತಾಗಿಪ್ಪ ಪದ್ಯ ಬಪ್ಪಗ ತದೇಕ ಚಿತ್ತಂದ ನಾವು ಕೇಳ್ತು. ಪದ್ಯವ ನಾವು ಮನಸ್ಸಿಲ್ಲೇ ಗುನುಗುತ್ತು. ಅದರ ಕೇಳ್ತಾ ಇಪ್ಪಗ ನಾವು ಬೇಡ ಬೇಡ ಹೇಳಿದರೂ ಕಣ್ಣಿನ ಕರೇಲಿ ಹಾಂಗೆ ಸುಮ್ಮನೆ ಕಣ್ಣೀರು ಹರಿತ್ತಿಲ್ಲೆಯಾ.... ಅಮ್ಮನ ಶಕ್ತಿಯೇ ಅಂತಾದ್ದು. ಆ ಹೊತ್ತಿಲ್ಲಿ ನಮ್ಮ ಮನಸಿಲ್ಲಿ ಅಮ್ಮ ಬಂದು ಕೂತಿರ‍್ತು. ಆ ಪದ್ಯಂಗ ಏವ ಭಾಷೆಲಿಯೇ ಇರಲಿ...ಎಲ್ಲರ ಮನಸ್ಸಿಂಗೆ ನಾಟುತ್ತು.


ಕೆಲವು ವರ್ಷ ಹಿಂದೆ ಹೋಪ.. ನಮ್ಮ ಬಾಲ್ಯಕ್ಕೆ... ನಾವು ಜೀವನಲ್ಲಿ ಮರೆಯಲಾಗದ್ದ ಹೆಚ್ಚಿನ ಘಟನೆಗೋ ಬಾಲ್ಯಲ್ಲೆ ನಡೆದ್ದು. (ಅಲ್ಲದಾ?) ಇಂದು ನಾವು ಅದರ ನೆಂಪು ಮಾಡುವಾಗ ಬೆಚ್ಚನೆಯ ಅನುಭವ ನೀಡ್ತು. ಆಟ, ಪಾಠ, ತುಂಟಾಟ, ಊಟ ಎಲ್ಲವುದೆ ಚೆಂದ. ನಾವು ಬೇಜಾರಿಲಿಪ್ಪಗ, ಏಕಾಂತಲಿಪ್ಪಗ ಸುಮ್ಮನೆ ಆಲೋಚನೆ ಮಾಡಿದರೆ ಸಾಕು. ಸುರುಳಿ ಸುತ್ತಿದ ಹಾಸಿಗೆಯ ಬಿಡಿಸಿದ ಹಾಂಗೆ ಅಂಬಗಾಣ ನೆನಪುಗ ಒಂದೋದಾಗಿ ನಮ್ಮ ಸ್ಮೃತಿಪಟಲಲ್ಲಿ ಬಿಚ್ಚಿಗೊಳ್ತಾ ಹೋಯ್ತು. ದೂರಲ್ಲಿಪ್ಪ ನಮ್ಮ ಮಾಣಿಯೊಂಗಕ್ಕೆ, ಕೂಸೂಗೊಕ್ಕೆ ಇದುವೇ ಸಂಗಾತಿಗ. ಬಾಲ್ಯ ಜೀವನದುದ್ದಕ್ಕೂ ಅಮ್ಮ ಇಪ್ಪದರಿಂದಾಗಿಯೇ ನವಗೆ ಆ ಘಟನೆಗೊ ಇಂದಿಂಗೂ ಕಾಡ್ತಾ ಇಪ್ಪದು.

ದೇವತೆಯಾಗಿ, ತಾಯಿಯಾಗಿ, ಗುರುವಾಗಿ ಫ್ರೆಂಡಾಗಿ ಅಮ್ಮ ಮಾಡದ್ದ ಸೇವೆ ಇಲ್ಲೆ. ಅದಕ್ಕೆ ಹಿರಿಯರು ಅಮ್ಮಂಗೆ ದೇವತೆ, ಗುರುವ ಸ್ಥಾನ ನೀಡಿದ್ದವು. (ಮಾತೃ ದೇವೋ ಬವ. ಮಕ್ಕೊಗೆ ಮನೆಯೇ ಮೊದಲ ಪಾಠ ಶಾಲೆ, ಅಮ್ಮನೇ ಗುರು). ಮಕ್ಕ ಎಷ್ಟೇ ದೊಡ್ಡ ತಪ್ಪು ಮಾಡಲಿ. ಕ್ಷಮುಸುವ ದೊಡ್ಡ ಗುಣ ಅಮ್ಮಂದ್ರಿಂಗೆ ದೈವದತ್ತವಾಗಿ ಬಯಿಂದು. ಅದಕ್ಕೆ ಅಮ್ಮನ ಕ್ಷಮಾಯಾಧರಿತ್ರಿ ಹೇಳಿಯೂ ಹೇಳ್ತವು. ಎಷ್ಟೇ ಕಷ್ಟ ಪಟ್ಟರೂ, ದುಃಖ ಅನುಭವಿಸಿದರೂ, ಅದರ ಮನಸ್ಸಿಲ್ಲೇ ಮಡುಕ್ಕೊಂಡಿಕಷ್ಟೇ ಹೊರತು, ಮಕ್ಕಳ ಎದುರು ತೋರುಸವು. ಅವು ಬಯಸುವುದು ಮಕ್ಕಳ ಸುಖ ಮಾತ್ರ.

ನಿನ್ನ ಇಷ್ಟು ದೊಡ್ಡ ಮಾಡೆಕ್ಕಾರೆ ಆನು ಎಷ್ಟು ಕಷ್ಟ ಪಟ್ಟಿದೆ ಹೇಳ್ತದು ನಿನಗೆ ಗೊಂತಿದ್ದಾ? ಹೇಳ್ತ ಮಾತು ಅಪ್ಪಂದ್ರ ಬಾಯಿಲಾದರೂ ಬಂದು ಹೋಕು. ಆದರೆ ಅಮ್ಮನ ಬಾಯಿಲಿ ಯಾವತ್ತು ಆ ಮಾತು ಬಾರ.
ಅಮ್ಮಂದ್ರ ಬಗ್ಗೆ ಎಷ್ಟು ಬರದರೂ, ಹೇಳಿದರೂ ಕಮ್ಮಿಯೇ. ಮಕ್ಕಳ ಜೀವನ ರೂಪಿಸುವಲ್ಲಿ ಅವು ಮಾಡುವ ಕೆಲಸಂಗ ಎಲೆಯ ಹಿಂದೆ ಇಪ್ಪ ಕಾಯಿಗಳ ಹಾಂಗೆ. ಅದು ಆರಿಂಗು ಗೊಂತಾಗ ಆದರೆ ಅವು ಅವರ ಕೆಲಸವ ಯಾವಾಗಲೂ ಮಾಡಿಕೊಂಡು ಹೋವ್ತವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆಯೇ.


ನಾವು ನಡೆವ ಪ್ರತಿ ಹೆಜ್ಜೆಲಿ ಅಮ್ಮಂದ್ರ ಶ್ರಮ ಇದ್ದು. ಜೀವನದ ನಾಟಕದಲ್ಲಿ ಅಮ್ಮಂದ್ರ ಪಾತ್ರ ದೊಡ್ಡದು. ಅವರ ನಿಸ್ವಾರ್ಥ, ಪ್ರೀತಿ ಕರುಣೆ, ವಾತ್ಸಲ್ಯ ಮಾರ್ಗದರ್ಶನಲ್ಲಿ ಮಿಂದೆದ್ದ ನವಗೆ ಜೀವನದ ದಾರಿಲಿ ಸರಾಗವಾಗಿ ನೆಡವಲೆ ಸಾಧ್ಯ ಆಯುತ್ತು. ಪರಿಸ್ಥಿತಿ ಹೀಂಗಿಪ್ಪಗ ಅಮ್ಮಂದ್ರಿಗೇ ಹೇಳಿ ಪ್ರತ್ಯೇಕವಾಗಿ ಒಂದು ದಿನ ತೆಗೆದು ಮಡಗಿ ’ಮದರ‍್ಸ್ ಡೇ’ ಹೇಳಿ ಆಚರಿಸುವುದು ನಮ್ಮ ಸಮಾಜದ ದೊಡ್ಡ ಚೋದ್ಯ.


ನಮ್ಮ ಹತ್ತರೆ ಯಾವಾಗಲೂ ಇಪ್ಪವರ ಬೆಲೆ ಅಂಬಗ ನವಗೆ ಗೊಂತಾವುತ್ತಿಲ್ಲೆ. ಅವು ನಮ್ಮಿಂದ ದೂರಲ್ಲಿ ಇಪ್ಪಗ ಅವರ ಮೌಲ್ಯ ಅರ್ಥ ಆವ್ತು. ಜೀವನದ ಬಂಡಿ ಓಡುಸಲೆ ಮನೆ ಬಿಟ್ಟು ದೂರ ದೂರದ ಊರುಗೊಕ್ಕೆ ಹೋದವೆಲ್ಲಾ ಇದರ ಕಳಕ್ಕೊಳ್ತಾ ಇದ್ದವು. ಆನು ಮೊದಲೇ ಹೇಳಿದಾಂಗೆ ಅವಕ್ಕೆ ಆ ನೆಂಪುಗಳೇ ಸಂಗಾತಿಗ. ಅದರ ಮತ್ತೆ ಮತ್ತೆ ಮೆಲುಕು ಹಾಕಿ ಹಿಂದೆ ಕಳೆದ ಮಧುರ ಕ್ಷಣಗಳನ್ನು ಸವಿಯ ಅನುಭವಿಸುತ್ತಾ ಇದ್ದವು.


ಇದುವರೆಗೆ ಈ ಭೂಮಿಲಿ
ಹುಟ್ಟಿದ ಆರಿಂಗೂ ಅಮ್ಮನ ಋಣ ತೀರುಸಲೆ ಎಡಿಗಾಯಿದಿಲ್ಲೆ ಹೇಳಿದರೆ, ಅಮ್ಮ ಅದೆಂತ ದೊಡ್ಡ ತ್ಯಾಗ ಮಾಡಿದ್ದು ಹೇಳಿ ಅರ್ಥ ಮಾಡಿಕೊಂಬಲೆ ಆರಿಂಗೂ ಕಷ್ಟ ಆಗ.. ಅಲ್ಲದಾ?

ಕಡೇ ಮಾತು: ಜಗತ್ತಿಲ್ಲಿ ಎಷ್ಟೋ ಮಕ್ಕೊಗೆ ಅಮ್ಮಂದ್ರಿಲ್ಲೆ. ಇನ್ನೆಷ್ಟೊ ಅಮ್ಮಂದ್ರಿಗೆ ಮಕ್ಕ ಇಲ್ಲೆ. ಇಬ್ಬರ ಶೋಕವೂ ಒಂದೇ ರೀತಿಯಾದ್ದು. ಅಂಥ ಪರಿಸ್ಥಿತಿ ಆರಿಂಗೂ ಬಪ್ಪಲಾಗ ಹೇಳ್ತದೆ ಹಾರೈಕೆ.

ಎನ್ನ ಈ ಮೊದಲ ಲೇಖನ ಎಲ್ಲಾ ಅಮ್ಮಂದ್ರಿಗೆ ಅರ್ಪಣೆ.

ಪ್ರೀತಿಲಿ ಕೆಪ್ಪಣ್ಣ


ಚಿತ್ರ ಕೃಪೆ: ಗೂಗಲ್Bold













Tuesday, October 20, 2009

ಅದಾ ಕೆಪ್ಪಣ್ಣನ ವರಾತ ಶುರು ಆತು..

ಹ್ಞಾಂ...
ಅಂತೂ ಬರವಲೆ ಶುರು ಮಾಡ್ತಾ ಇದ್ದೆ ಹೇಳ್ತ ಖುಶಿ ಎನಗೆ. ಪುಸ್ತಕಗೊಕ್ಕೆ ಮುನ್ನುಡಿ ಇಪ್ಪ ಹಾಂಗೆ ಇದು ಎನ್ನ ಬ್ಲೋಗಿನ ಮುನ್ನುಡಿ. ಈ ಬ್ಲೋಗಿಲ್ಲಿ ಎಂತರ ಬರವದು ಹೇಳ್ತ ನಿಖರ ರೂಪು ರೇಶೆ ಎನ್ನತ್ತರೆ ಇಲ್ಲೆ. ನಮ್ಮ ಸುತ್ತ ಮುತ್ತ ಸುದ್ದಿಗೆ ಬರ ಇಲ್ಲೆ ಇದಾ. ಹಾಂಗಾಗಿ ಏವುದಾದರೂ ಒಂದು ವಿಷಯದ ಬಗ್ಗೆ ಬರವಲಕ್ಕು ಹೇಳ್ತ ವಿಶ್ವಾಸ ಎನ್ನದು. ಕೇವಲ ಹವ್ಯಕ ಸಮುದಾಯ ಮಾತ್ರವಲ್ಲ, ಅದರ ಹೊರತಾದ ಲೇಖನಂಗಳ ಬರೆವ ಪ್ರಯತ್ನ ಆನು ಮಾಡುವೆ. ಆನು ಮೊದಲೇ ಹೇಳಿದಾಂಗೆ ಕೆಪ್ಪಣ್ಣ ಬರದ್ದರಲ್ಲಿ ಒಳ್ಳೆ ಲೇಖನಂಗ ಇರದ್ದಿರ. ಹಾಂಗೇಳಿ ಕೆಟ್ಟ ಲೇಖನಂಗ ಬಾರದಿದ್ದರ ಆತೋ. ಆದರೆ ನಮ್ಮ ಒಪ್ಪಣ್ಣನ ಹಾಂಗೆ ಪ್ರತಿ ವಾರ ಎನ್ನಂದ ಬರವಲೆಡಿಯ ಇದಾ. ನಿಂಗ ಸುಮ್ಮನೆ ಓದಿಕ್ಕಿ ಅಂತೆ ಕಾಮೆಂಟು ಮಾಡಿ ಆತಾ.